Sodematha

ಶ್ರೀಲಕ್ಷ್ಮೀ ಶೋಭಾನೆ ಪಠನ ಯಜ್ಞ

30 Sep, 2019

ಸೋದೆಯಲ್ಲಿ ಶ್ರೀವಾದಿರಾಜ ಗುರುಸಾರ್ವಭೌಮರಿಗೆ ನೂತನವಾದ  ಶಿಲಾಭವನ ನಿರ್ಮಾಣವಾಗುತ್ತಿದ್ದು ಆ ಪ್ರಯುಕ್ತ ವಾದಿರಾಜರಿಂದ ರಚಿತವಾದ ಶ್ರೀಲಕ್ಷ್ಮೀ ಶೋಭಾನೆಯನ್ನು ನಾಡಿನಾದ್ಯಂತ ಮನೆ ಮನೆಗಳಲ್ಲಿ ಪಠಿಸುವ ಮಹತ್ಕಾರ್ಯ "ಶ್ರೀಲಕ್ಷ್ಮೀ ಶೋಭಾನೆ ಪಠನ ಯಜ್ಞ" ಎಂಬ ವಿನೂತನ ಕಾರ್ಯಕ್ರಮವನ್ನು ಸೋದೆ ಮಠಾಧೀಶರಾದ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಸಂಕಲ್ಪಿಸಿದ್ದು , ಉಡುಪಿಯ ಸಮೀಪ ಬಾರ್ಕೂರು ವಲಯದ ಕಾರ್ಯಕ್ರಮವು ನವರಾತ್ರಿಯ ಮೊದಲದಿನದ ಪರ್ವಕಾಲದಲ್ಲಿ ಉಡುಪಿಯ ಪ್ರಸಿದ್ಧ ವೈದ್ಯರಾದ Dr.ನಿರಂಜನ್ ರಾವ್ ಇವರ ಸ್ವಗೃಹದಲ್ಲಿ ಶುಭಾರಂಭಗೊಂಡಿತು. ಈ ಸಂದರ್ಭದಲ್ಲಿ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅನುಗ್ರಹ ಸಂದೇಶ ನೀಡಿದರು.