Sodematha

ಶ್ರೀಮನ್ಮಧ್ವಸಿದ್ಧಾಂತಪ್ರಬೋಧಕಸಂಸ್ಕೃತಾಧ್ಯಯನಕೇಂದ್ರ ಉಡುಪಿ ಇದರ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಮತ್ತು KMC ಮಣಿಪಾಲದ ಸಹಯೋಗದೊಂದಿಗೆ ದಿನಾಂಕ 14-01-2022 ರಂದು ಸ್ವಯಂ ಪ್ರೇರಿತ ರಕ್ತದಾನ ಶಿಬಿರವು ನಡೆಯಿತು

14 Jan, 2022

ಶ್ರೀಮನ್ಮಧ್ವಸಿದ್ಧಾಂತಪ್ರಬೋಧಕಸಂಸ್ಕೃತಾಧ್ಯಯನಕೇಂದ್ರ ಉಡುಪಿ ಇದರ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಮತ್ತು KMC ಮಣಿಪಾಲದ ಸಹಯೋಗದೊಂದಿಗೆ ದಿನಾಂಕ 14.01.2022 ರಂದು ಸ್ವಯಂ ಪ್ರೇರಿತ ರಕ್ತದಾನ ಶಿಬಿರವು ನಡೆಯಿತು. ಶ್ರೀ ಸೋದೆ ವಾದಿರಾಜ ಮಠಾಧೀಶರಾದ ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ದೀಪ ಬೆಳಗಿಸುವ ಮೂಲಕ ರಕ್ತದಾನ ಶಿಬಿರಕ್ಕೆ ಚಾಲನೆಯನ್ನು ನೀಡಿದರು. "ಮನುಷ್ಯ ತನ್ನ ಶರೀರವನ್ನು ಪರೋಪಕಾರಕ್ಕಾಗಿ ಬಳಸುವುದರ ಬಗೆಯನ್ನು ತಿಳಿದುಕೊಂಡಿರಬೇಕು. ಶಾಸ್ತ್ರಾಧ್ಯಯನದ ಜೊತೆ ಸಾಮಾಜಿಕ ಸೇವೆಯ ಅರಿವು ಮನುಷ್ಯನಿಗೆ ಇರಬೇಕು. ರಕ್ತದಾನವು ಅತ್ಯಂತ ಶ್ರೇಷ್ಠವಾಗಿರುವ ದಾನವಾಗಿದೆ" ಎಂದರು.ಎಸ್ ಎಂ ಎಸ್ ಪಿ ಸಭೆಯ ಕಾರ್ಯದರ್ಶಿಗಳಾದ ಶ್ರೀಯುತ ದೇವಾನಂದ ಉಪಾಧ್ಯಾಯರು, ಕೋಶಾಧಿಕಾರಿಗಳಾದ ಶ್ರೀಯುತ ಚಂದ್ರಶೇಖರ ಆಚಾರ್ಯ, ಕಸ್ತೂರ್ಬಾ ವೈದ್ಯಕೀಯ ವಿದ್ಯಾಲಯದ ವೈದ್ಯರಾದ ಡಾ. ಬೆಮ್ಮ ಇವರು ಉಪಸ್ಥಿತರಿದ್ದರು. ಪ್ರಾಚಾರ್ಯರಾದ ಪ್ರೊ. ಆರ್ ಹರಿದಾಸ ಭಟ್ಟ ಇವರು ಸ್ವಾಗತಿಸಿದರು. ಎನ್ ಎಸ್ ಎಸ್ ಸಂಯೋಜನಾಧಿಕಾರಿಗಳಾದ ವಿ. ರಾಧಾಕೃಷ್ಣ ಬಿ ಇವರು ಧನ್ಯವಾದವನ್ನು ಸಮರ್ಪಿಸಿದರು. ವಿದ್ಯಾರ್ಥಿ ಅರವಿಂದ ಭಟ್ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.