ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಶ್ರೀಪ್ರಮೋದ್ ಮಧ್ವರಾಜ್ ಅವರು ಸೋದೆ ವಾದಿರಾಜ ಮಠಕ್ಕೆ ಆಗಮಿಸಿ ಶ್ರೀವಾದಿರಾಜ ಗುರುಸಾರ್ವಭೌಮರ ಹಾಗೂ ಶ್ರೀಭೂತರಾಜರ ದರ್ಶನವನ್ನು ಪಡೆದು , ಚಾತುರ್ಮಾಸ್ಯ ವ್ರತನಿರತರಾದ ಸೋದೆ ಶ್ರೀ ವಿಶ್ವವಲ್ಲಭ ತೀರ್ಥರನ್ನು , ಭೀಮನಕಟ್ಟೆ ಮಠದ ಶ್ರೀರಘುವರೇಂದ್ರ ತೀರ್ಥರನ್ನು ಹಾಗೂ ಶೀರೂರು ಮಠದ ಶ್ರೀವೇದವರ್ಧನ ತೀರ್ಥರನ್ನು ಭೇಟಿ ಮಾಡಿ ಫಲ ಮಂತ್ರಾಕ್ಷತೆ ಪಡೆದರು.