Sodematha

ಗ್ರಂಥಗಳ ಮಂಗಲಮಹೋತ್ಸವ

21 Feb, 2021

ಶ್ರೀಮದನುವ್ಯಾಖ್ಯಾನ ಸಹಿತ ಶ್ರೀಮನ್ನ್ಯಾಯಸುಧಾ ಹಾಗೂ ಯುಕ್ತಿಮಲ್ಲಿಕಾ ಗ್ರಂಥಗಳ ಮಂಗಲಮಹೋತ್ಸವದ ಅಂಗವಾಗಿ  ವಿದ್ವಾಂಸರಾದ ಹರಿದಾಸ ಭಟ್ ಹಾಗೂ ಶ್ಯಾಮಸುಂದರಾಚಾರ್ಯ ಬಂಡಿ ಇವರಿಂದ ಮಧ್ವಮತದ ಹಿರಿಮೆ-ಗರಿಮೆಯ ಕುರಿತು ಸಂವಾದ, ಗುರುರಾಜರ ಮಾತಿನಲ್ಲಿ ಮಧ್ವರಾಜರು ಎಂಬ ವಿಷಯದಲ್ಲಿ ಮಂತ್ರಾಲಯ ವಾದಿರಾಜಾಚಾರ್ಯರಿಂದ ಹಾಗೂ ದಾಸಸಾಹಿತ್ಯಕ್ಕೆ ಗುರುರಾಜರ ಕೊಡುಗೆ ಎಂಬ ವಿಷಯದಲ್ಲಿ ಮಾನಕರಿ ಶ್ರೀನಿವಾಸಾಚಾರ್ಯರಿಂದ ಉಪನ್ಯಾಸ ನಡೆಯಿತು.  ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಸೋದೆ ವಾದಿರಾಜ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ಹಾಗೂ ಚಿತ್ರಾಪುರ ಮಠದ ಶ್ರೀವಿದ್ಯೇಂದ್ರ ತೀರ್ಥ ಶ್ರೀಪಾದರು ಉಪಸ್ಥಿತರಿದ್ದು ಅನುಗ್ರಹ ಸಂದೇಶ ನೀಡಿದರು.